ಆರ್ಗೋಡು ಮೋಹನದಾಸ ಶೆಣೈಯವರಿಗೆ ಸೀತಾನದಿ ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಒಕ್ಟೋಬರ್ 8 , 2015
|
ಒಕ್ಟೋಬರ್ 8, 2015
|
ಆರ್ಗೋಡು ಮೋಹನದಾಸ ಶೆಣೈಯವರಿಗೆ ಸೀತಾನದಿ ಪ್ರಶಸ್ತಿ ಪ್ರದಾನ
ಹೆಬ್ರಿ :
ಬಡಗುತಿಟ್ಟು ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದರಲ್ಲಿ ಪ್ರಮುಖರು ಜಿ. ಎಸ್. ಬಿ ಸಮಾಜದವರು. ಕುಂಜಾಲು ಭಾಗವತಿಕೆ ಶೈಲಿಯ ಜನಕ ಕುಂಜಾಲು ಶೇಷಗಿರಿ ಕಿಣಿ, ಮೇರು ಕಲಾವಿದರಾದ ತೆಕ್ಕಟ್ಟೆ ಬಾಬಣ್ಣ ಶ್ಯಾನುಬಾಗ್, ಅರ್ಥದಾರಿ ತೆಕ್ಕಟ್ಟೆ ಆನಂದ ಮಾಸ್ತರ್, ಬೊಂಬೆಯಾಟದ ಜನಕ ಕೊಗ್ಗ ದೇವಣ್ಣ ಕಾಮತ್, ಹಿರಿಯ ಭಾಗವತ ಜಾನುವಾರುಕಟ್ಟೆ ಗೋಪಲ ಕಾಮತ್, ಹವ್ಯಾಸಿ ರಂಗದ ಮೇರುಕಲಾವಿದ ಹಳ್ಳಾಡಿ ಸುಬ್ರಾಯ ಮಲ್ಯ, ಆರ್ಗೋಡು ಗೋವಿಂದರಾಯ ಶೆಣೈಯವರಂತ ಈ ಸಮಾಜದ ಅನೇಕ ಮಂದಿ ತಮ್ಮ ಜೀವಿತದಲ್ಲಿಯೇ ದಂತಕಥೆಯಾದವರು. ಅವರಾರಿಗೂ ಯಾವುದೇ ಸನ್ಮಾನ ಪ್ರಶಸ್ತಿ ದೊರೆತಿಲ್ಲ. ಅವರೆಲ್ಲರ ಪ್ರತಿನಿಧಿಯಾಗಿ ಆರ್ಗೋಡು ಮೋಹನದಾಸ ಶೈಣೈಯವರಿಗೆ ಸೀತಾನಧಿ ಪ್ರಶಸ್ತಿ ದೊರೆತಿರುವುದು ಅರ್ಥಪೂರ್ಣ ಎಂದು ಯಕ್ಷಗಾನ ವಿಮರ್ಶಕ ಮಣಿಪಾಲದ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಹೇಳಿದರು.
ಅವರು ಹೆಬ್ರಿಯಲ್ಲಿ ನೆಡೆದ ಸೀತಾನದಿ ಗಣಪಯ್ಯ ಶೆಟ್ಟಿಯವರ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕ್ರತ ಆರ್ಗೋಡು ಮೋಹನದಾಸ ಶೆಣೈಯವರನ್ನು ಅಭಿನಂದಿಸಿ ಮಾತನಾಡಿದರು. ಸೀತಾನಧಿ ಸಂಸ್ಮರಣಾ ಸಮಿತಿ ಅದ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ ಅದ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದ ಶೈಣೈಯವರನ್ನು 10,000 ಸಾವಿರ ನಗದಿನೊಂದಿಗೆ ಸನ್ಮಾನಿಸಲಾಯ್ತು. ಭಾಗವತ ಪೊಲ್ಯ ಲಕ್ಷಿನಾರಾಯಣ ಶೆಟ್ಟಿ ಗಣಪಯ್ಯರವರ ಸಂಸ್ಮರಣಾ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಪ್ರಸನ್ನ ಬಲ್ಲಾಲ್. ಪೊಲ್ಯ ಉಮೇಶ ಶೆಟ್ಟಿ. ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ಬಿ. ಎಂ. ಶೆಣೈ ಉಪಸ್ಥಿತರಿದ್ದರು.
ಪತ್ರಕರ್ತ ಪಿ. ವಿ. ಆನಂದ ರಚಿತ ಸೀತಾನದಿ ಗಣಪಯ್ಯ ಶೆಟ್ಟರ ಜೀವನ ಚರಿತ್ರೆಯನ್ನು ಜಯರಾಮ ಶೆಟ್ಟರು ಬಿಡುಗಡೆಗೊಳಿಸಿದರು. ಸೀತಾನಧಿ ವಿಠಲ ಶೆಟ್ಟಿ ವಿದ್ಯಾರ್ಥಿ ವೇತನ ವಿತರಿಸಿದರು. ಪಾಂಚಜನ್ಯ ಸಾಂಸ್ಕ್ರತಿಕ ಸಂಘಟನೆಯ ಗೌರವ ಅದ್ಯಕ್ಷ ಬಾಸ್ಕರ ಜೋಯಿಷ್ ಉಪಸ್ಥಿತರಿದ್ದರು. ರವೀಂದ್ರ ಪುರೋಹಿತ್ ಸ್ವಾಗತಿಸಿ ಸೀತಾರಾಮ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ಪಾಟೀಲ್ ವಂದಿಸಿದರು
|
|
|